College Campus

Friday 1 February 2019

Celebration of Republic Day


ಮನಸ್ಸು ಮತ್ತು ಪರಿಸರ ಶುದ್ಧಿಯೇ ದೇಶಕ್ಕೆ ಕೊಡುವ ಕೊಡುಗೆ 
 -ಪ್ರೋ.ಕೆ.ವಿ.ಸತ್ಯನ್  ನಿರ್ದೇಶಕರು, ಹರಿವಿದ್ಯಾಲಯ
  ಭಾರತವನ್ನು ಸ್ವಾತಂತ್ರ್ಯ ಗೊಳಿಸುವಲ್ಲಿ ಅನೇಕ ಸಾಧಕರ ಶ್ರಮವಿದೆ. ಅಂತೆಯೆ ಅವರೆಲ್ಲರ ಶ್ರಮದ ಫಲವಾಗಿ ನಾವಿಂದು ಜೀವಿಸುತ್ತಿದ್ದೇವೆ. ದೇಶ ನಮಗೆ ಎಲ್ಲವನ್ನು ನೀಡಿದೆ ನಾವು ದೇಶಕ್ಕೆ ಕೊಡುವ ಕೊಡುಗೆ ಎಂದರೆ ತಮ್ಮ ಮನಸ್ಸು ಮತ್ತು ಪರಿಸರವನ್ನು ಶುದ್ಧವಾಗಿಟ್ಟುಕೊಂಡು ಎಲ್ಲರೊಡನೆ ಪ್ರೀತಿಯಿಂದ ಬದುಕು ನಡೆಸಿ. ಎಲ್ಲರಿಗೂ ೭೦ ನೇ ಗಣರಾಜ್ಯೋತ್ಸವದ ಶುಭಾಶಯಗಳುಎಂದು ಹರಿವಿದ್ಯಾಲಯ ಶಾಲೆಯ ನಿರ್ದೇಶಕರಾದ ಪ್ರೋ.ಕೆ.ವಿ.ಸತ್ಯನ್ ಹೇಳಿದರು. ೭೦ ನೇ ಗಣರಾಜ್ಯೋತ್ಸವ ಆಚರಣೆಯ ಅಂಗವಾಗಿ ಬೋಗಾದಿಯ ಹರಿವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ  ಮುಖ್ಯ ಅತಿಥಿಗಳಾಗಿ ಆಗಮಿಸಿ  ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಶಾಲೆಯ ಆಂಗ್ಲ ಭಾಷಾ ಶಿಕ್ಷಕರಾದ ಶ್ರೀ ರಾಜಗೋಪಾಲ್ ಅವರು ಈ ದಿನದ ವಿಶೇಷತೆಯನ್ನು ತಿಳಿಸಿದರು. ವಿದ್ಯಾರ್ಥಿಗಳು, ಪೋಷಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಶ್ರೀ ಶ್ರೀವತ್ಸ, ಮುಖ್ಯೋಪಾಧ್ಯಾಯಿನಿಯರು, ಶಿಕ್ಷಕ-ಶಿಕ್ಷಕೇತರ ವೃಂದದವರು, ಪೋಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.























No comments:

Post a Comment